ಸುಧೀರ್ ಕಾಕರ್ (೨೫ ಜುಲೈ ೧೯೩೮ - ೨೨ ಏಪ್ರಿಲ್ ೨೦೨೪) ಒಬ್ಬ ಭಾರತೀಯ ಮನೋವಿಶ್ಲೇಷಕ, ಕಾದಂಬರಿಕಾರ ಮತ್ತು ಸಾಂಸ್ಕೃತಿಕ ಮನೋವಿಜ್ಞಾನ ಮತ್ತು ಧರ್ಮದ ಮನೋವಿಜ್ಞಾನ ಕ್ಷೇತ್ರಗಳಲ್ಲಿ ಲೇಖಕ. == ಶಿಕ್ಷಣ ಮತ್ತು ವೈಯಕ್ತಿಕ ಜೀವನ == ಕಾಕರ್‌ರವರು ತಮ್ಮ ಬಾಲ್ಯವನ್ನು ಈಗ ಪಾಕಿಸ್ತಾನದಲ್ಲಿರುವ ಸರ್ಗೋಧಾ ಬಳಿ ಮತ್ತು ರೋಹ್ಟಕ್‌ನಲ್ಲಿ ಕಳೆದರು. ಅಲ್ಲಿ ಅವರ ತಂದೆ ಬ್ರಿಟಿಷ್ ರಾಜ್ ಸಮಯದಲ್ಲಿ ಮತ್ತು ಭಾರತದ ವಿಭಜನೆಯ ಸಮಯದಲ್ಲಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದರು ಮತ್ತು ಕುಟುಂಬವು ನಗರದಿಂದ ನಗರಕ್ಕೆ ಸ್ಥಳಾಂತರಗೊಳ್ಳುತ್ತಿತ್ತು. ಎಂಟನೇ ವಯಸ್ಸಿನಲ್ಲಿ ಅವರು ನವದೆಹಲಿಯ ಮಾಡರ್ನ್ ಶಾಲೆಯಲ್ಲಿ ಬೋರ್ಡರ್ ಆಗಿ ಸೇರಿಕೊಂಡರು. ಅವರು ಶಾಲಾ ವಸತಿ ನಿಲಯಗಳಲ್ಲಿ ಸಲಿಂಗಕಾಮಿ ಮುಖಾಮುಖಿಗಳ ಬಗ್ಗೆ ಬರೆದಿದ್ದಾರೆ. ನಂತರ ಅವರು ಶಿಮ್ಲಾದ ಸೇಂಟ್ ಎಡ್ವರ್ಡ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಅವರು ೧೯೫೩ ರಲ್ಲಿ ಜೈಪುರದ ಮಹಾರಾಜ ಕಾಲೇಜಿನಲ್ಲಿ ತಮ್ಮ ಮಧ್ಯಂತರ ಅಧ್ಯಯನವನ್ನು ಪ್ರಾರಂಭಿಸಿದರು. ನಂತರ ಅವರ ಕುಟುಂಬವು ಅವರನ್ನು ಅಹಮದಾಬಾದ್‌ಗೆ ಕಳುಹಿಸಿತು. ಅಲ್ಲಿ ಕಾಕರ್‌ರವರು ತಮ್ಮ ಚಿಕ್ಕಮ್ಮನಾದ ಕಮಲಾ ಚೌಧರಿ ಅವರೊಂದಿಗೆ ವಾಸಿಸುತ್ತಿದ್ದರು ಮತ್ತು ಎಂಜಿನಿಯರಿಂಗ್ ಕಾಲೇಜಿಗೆ ಸೇರಿದರು. ೧೯೫೮ ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಇ ಪದವಿ ಪಡೆದ ನಂತರ, ಕಾಕರ್‌ರವರು ಮ್ಯಾನ್ಹೈಮ್ ವಿಶ್ವವಿದ್ಯಾಲಯದಲ್ಲಿ (೧೯೬೦-೬೪) ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ (ಡಿಪಿಎಲ್-ಕೆಎಫ್ಎಂ.) ಮತ್ತು ವಿಯೆನ್ನಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅವರು ೧೯೭೧ ರಲ್ಲಿ ಫ್ರಾಂಕ್ಫರ್ಟ್ ವಿಶ್ವವಿದ್ಯಾಲಯದ ಸಿಗ್ಮಂಡ್ ಫ್ರಾಯ್ಡ್ ಇನ್ಸ್ಟಿಟ್ಯೂಟ್‌ನಲ್ಲಿ ಮನೋವಿಶ್ಲೇಷಣೆಯಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. ೧೯೭೫ ರಲ್ಲಿ, ಸುಧೀರ್ ಕಾಕರ್‌ರವರು ತಮ್ಮ ಚಿಕ್ಕಮ್ಮ ಕಮಲಾ ಅವರೊಂದಿಗೆ ದೆಹಲಿಗೆ ತೆರಳಿದರು. ತದನಂತರ ಕಾಕರ್‌ರವರು ಗೋವಾದಲ್ಲಿ ವಾಸಿಸುತ್ತಿದ್ದರು ಮತ್ತು ಜರ್ಮನ್ ಬರಹಗಾರ್ತಿ ಮತ್ತು ತುಲನಾತ್ಮಕ ಧರ್ಮಗಳ ವಿದ್ವಾಂಸರಾದ ಕ್ಯಾಥರಿನಾ (ಜನನ ೧೯೬೭) ಅವರನ್ನು ವಿವಾಹವಾದರು. ಈ ದಂಪತಿಗಳಿಗೆ ರಾಹುಲ್ ಮತ್ತು ಶ್ವೇತಾ ಎಂಬ ಇಬ್ಬರು ಮಕ್ಕಳಿದ್ದಾರೆ. ಕಾಕರ್‌ರವರು ೨೨ ಏಪ್ರಿಲ್ ೨೦೨೪ ರಂದು ತಮ್ಮ ೮೫ ನೇ ವಯಸ್ಸಿನಲ್ಲಿ ನಿಧನರಾದರು. . == ವೃತ್ತಿ == ೧೯೭೫ ರಲ್ಲಿ ಭಾರತಕ್ಕೆ ಮರಳಿದ ನಂತರ, ಸುಧೀರ್ ಕಾಕರ್‌ರವರು ದೆಹಲಿಯಲ್ಲಿ ಮನೋವಿಶ್ಲೇಷಕರಾಗಿ ಅಭ್ಯಾಸವನ್ನು ಪ್ರಾರಂಭಿಸಿದರು. ಅಲ್ಲಿ, ಅಲ್ಪಾವಧಿ ಸಮಯದಲ್ಲಿ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (೧೯೭೬-೭೭) ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಹಾರ್ವರ್ಡ್‌ನ ವಿಶ್ವ ಧರ್ಮಗಳ ಅಧ್ಯಯನ ಕೇಂದ್ರದಲ್ಲಿ (೨೦೦೧–೦೨), ಚಿಕಾಗೊ (೧೯೮೯–೯೩), ಮೆಕ್ಗಿಲ್ (೧೯೭೬–೭೭), ಮೆಲ್ಬೋರ್ನ್ (೧೯೮೧), ಹವಾಯಿ (೧೯೯೮) ಮತ್ತು ವಿಯೆನ್ನಾ (೧೯೭೪–೭೫), ಫ್ರಾನ್ಸ್‌ನ ಇನ್ಸೆಡ್ (೧೯೯೪–೨೦೧೩) ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ಅವರು ಪ್ರಿನ್ಸ್ಟನ್‌ನ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ, ವಿಸ್ಸೆನ್ಸ್ಚಾಫ್ಟ್ಸ್ಕೋಲೆಗ್ (ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ), ಬರ್ಲಿನ್, ಕಲೋನ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಅಡ್ವಾನ್ಸ್ಡ್ ಸ್ಟಡಿ ಆಫ್ ಹ್ಯುಮಾನಿಟೀಸ್‌ನಲ್ಲಿ ಜೊತೆಗಾರ ಆಗಿದ್ದರು. ಕಾಕರ್ ೨೫ ವರ್ಷಗಳ ಕಾಲ ನವದೆಹಲಿಯಲ್ಲಿ ಖಾಸಗಿ ಮನೋವಿಶ್ಲೇಷಣಾ ಅಭ್ಯಾಸದಲ್ಲಿದ್ದರು ಮತ್ತು ೨೦೦೩ ರಲ್ಲಿ ಭಾರತದ ಗೋವಾದಲ್ಲಿನ ತಮ್ಮ ವಾಸಸ್ಥಳಕ್ಕೆ ತೆರಳಿದರು. ಅಂದಿನಿಂದ ಅವರು ಗೋವಾದ ಬೆನೌಲಿಮ್ ಎಂಬ ಹಳ್ಳಿಯಲ್ಲಿ ತಮ್ಮ ಅಭ್ಯಾಸವನ್ನು ಹೊಂದಿದ್ದರು. ಅವರು ಗೋವಾ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ೨೦೧೮ ರಲ್ಲಿ ಮಕ್ಕಳ ಅತ್ಯಾಚಾರಕ್ಕೆ ಮರಣದಂಡನೆಗೆ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ಅವರು ಮಕ್ಕಳ ಅತ್ಯಾಚಾರದ ಅಪರಾಧಿಗಳ ಬಗ್ಗೆ ದಯಾಪರತೆಯನ್ನು ಪ್ರತಿಪಾದಿಸುವ ಮೂಲಕ, ಮಗುವಿನ ಸುರಕ್ಷತೆಯ ಬಗ್ಗೆ ಕುಟುಂಬದ ಪ್ರತಿಷ್ಠೆ ಮತ್ತು ಕುಟುಂಬದ ಬಂಧದ ರಕ್ಷಣೆಗೆ ಒತ್ತು ನೀಡುವ ಮೂಲಕ ವಿವಾದವನ್ನು ಸೃಷ್ಟಿಸಿದರು. == ಮನೋವಿಶ್ಲೇಷಣೆ ಮತ್ತು ಅತೀಂದ್ರಿಯತೆ == ಮನೋವಿಶ್ಲೇಷಣೆ ಮತ್ತು ಅತೀಂದ್ರಿಯತೆಯ ನಡುವಿನ ಸಂಬಂಧವು ಸುಧೀರ್ ಕಾಕರ್ ಅವರ ಕೆಲಸದ ಒಂದು ಭಾಗವಾಗಿದೆ. ಅವರ ವ್ಯಕ್ತಿತ್ವದ ವಿಶ್ಲೇಷಣೆಗಳೆಂದರೆ, ದಿ ಇನ್ನರ್ ವರ್ಲ್ಡ್ (೧೯೭೮) ನಲ್ಲಿ ಸ್ವಾಮಿ ವಿವೇಕಾನಂದ , ಇಂಟಿಮೆಟ್ ರಿಲೇ‌ಷ್ ನ್ಸ್ ಮೋಹನ್ ದಾಸ್ ಗಾಂಧಿ (೧೯೮೯), ಮತ್ತು ಅನಾಲಿಸ್ಫ ಆಂಡ್ ಮಿಸ್ಟಿಕ್ (೧೯೯೧) ನಲ್ಲಿ ರಾಮಕೃಷ್ಣ ಅವರ ವಿಶ್ಲೇಷಣೆ. ಕಾಕರ್ ಅವರ ಕಾದಂಬರಿ ಎಕ್ಟಾಸಿಯಲ್ಲಿ (೨೦೦೩) "ಸಂದೇಹವಾದಿಗಳು ಮತ್ತು ಅತೀಂದ್ರಿಯ ಮನಸ್ಸುಗಳ ಬಗ್ಗೆ ಪ್ರತ್ಯೇಕವಾಗಿ ಬರೆಯಲಾಗಿದೆ. ಮತ್ತು "ಆಧ್ಯಾತ್ಮಿಕ ಭಾರತದ ಆತ್ಮಚಿತ್ರದ ಮೂಲಕ ಪ್ರಯಾಣದ ಆರಂಭ" ಕಥೆಯು ರಾಜಸ್ಥಾನದಲ್ಲಿ ೧೯೪೦ ಅಥವಾ ೧೯೬೦ ರ ದಶಕದಲ್ಲಿದೆ. ಮನೋವಿಶ್ಲೇಷಕರಾದ ಅಲನ್ ರೋಲ್ಯಾಂಡ್‌ರವರು (೨೦೦೯) ಯಾವಾಗ ಕಾಕರ್‌ರವರು ತನ್ನ ಮನೋವಿಶ್ಲೇಷಣಾತ್ಮಕ ತಿಳುವಳಿಕೆಯನ್ನು ಈ ಮೂವರು ಆಧ್ಯಾತ್ಮಿಕ ವ್ಯಕ್ತಿಗಳಿಗೆ "ಸ್ವಾಮಿ ವಿವೇಕಾನಂದ, ಗಾಂಧಿ, ರಾಮಕೃಷ್ಣ" ಅನ್ವಯಿಸಿದಾಗ, ಅವರ ವಿಶ್ಲೇಷಣೆಗಳು "ಜೆಫ್ರಿ ಮಾಸನ್ ಅವರಂತೆಯೇ ಸಂಪೂರ್ಣವಾಗಿ ಕಡಿಮೆಗೊಳಿಸುತ್ತವೆ" ಎಂದು ಬರೆಯುತ್ತಾರೆ. ಮನೋವಿಶ್ಲೇಷಣಾತ್ಮಕ ದೃಷ್ಟಿಕೋನದಿಂದ ಕಾಕರ್ ಅವರ ಅನುಭಾವದ ಸೈದ್ಧಾಂತಿಕ ತಿಳುವಳಿಕೆಯನ್ನು ರೋಲ್ಯಾಂಡ್ ನಿರಾಕರಿಸುತ್ತಾರೆ ಮತ್ತು "ಆಧ್ಯಾತ್ಮಿಕ ಆಕಾಂಕ್ಷೆಗಳು, ಆಚರಣೆಗಳು ಮತ್ತು ಅನುಭವಗಳು ಮೂಲಭೂತವಾಗಿ ಹಿಮ್ಮುಖತೆಯನ್ನು ಒಳಗೊಂಡಿವೆಯೇ ಎಂಬುದು ಹೆಚ್ಚು ಪ್ರಶ್ನಾರ್ಹವಾಗಿದೆ" ಎಂದು ಬರೆಯುತ್ತಾರೆ. ವೈಯಕ್ತಿಕ ಮಟ್ಟದಲ್ಲಿ, ಕಾಕರ್ ಅವರಿಗೆ ಆಧ್ಯಾತ್ಮಿಕತೆ ಎಂದರೆ ವ್ಯಕ್ತಿಯು, ನಿಸರ್ಗ, ಕಲೆ, ಸಂಗೀತ ಮತ್ತು ದೈವಿಕತೆಯೊಂದಿಗೆ ಆಳವಾಗಿ ಸಂಪರ್ಕಿಸುವ ಕ್ಷಣಗಳು. ಅವರ ಆಧ್ಯಾತ್ಮಿಕ ನಂಬಿಕೆಗಳು ವೈಚಾರಿಕವಾದಿ ತಂದೆ ಮತ್ತು ಧಾರ್ಮಿಕ ಮನೋಭಾವದ ತಾಯಿಯ ಸಮ್ಮಿಳಿತದಿಂದ ಪ್ರಭಾವಿತವಾಗಿದೆ. == ಪ್ರಶಸ್ತಿಗಳು ಮತ್ತು ಗೌರವಗಳು == ಕಾಕರ್ ಅವರಿಗೆ ೧೯೮೭ ರ ಅಮೆರಿಕನ್ ಆಂಥ್ರೊಪೊಲಾಜಿಕಲ್ ಅಸೋಸಿಯೇಷನ್‌ನ ಸೈಕಾಲಾಜಿಕಲ್ ಆಂಥ್ರೋಪಾಲಜಿಗಾಗಿ ಬಾಯ್ಯರ್ ಪ್ರಶಸ್ತಿಯನ್ನು ನೀಡಲಾಯಿತು. ಅವರು ಆರ್ಡರ್ ಆಫ್ ಮೆರಿಟ್, ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ, ಫೆಬ್ರವರಿ (೨೦೧೨), ವಿಶಿಷ್ಟ ಸೇವಾ ಪ್ರಶಸ್ತಿ, ಇಂಡೋ-ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್(೨೦೦೭), ಫೆಲೋ, ನ್ಯಾಷನಲ್ ಅಕಾಡೆಮಿ ಆಫ್ ಸೈಕಾಲಜಿ, ಭಾರತ(೨೦೦೭), ಅಕಾಡೆಮಿ ಯೂನಿವರ್ಸೆಲ್ ಡೆಸ್ ಕಲ್ಚರ್ಸ್, ಫ್ರಾನ್ಸ್(೨೦೦೩), ಅಬ್ರಹಾಂ ಕಾರ್ಡಿನರ್ ಪ್ರಶಸ್ತಿ, ಕೊಲಂಬಿಯಾ ವಿಶ್ವವಿದ್ಯಾಲಯ (೨೦೦೨), ರಾಕ್‌ಫೆಲ್ಲರ್ ರೆಸಿಡೆನ್ಸಿ, ಬೆಲ್ಲಾಜಿಯೊ. ಏಪ್ರಿಲ್ -ಮೇ ೧೯೯೯, ಗೊಥೆ ಇನ್ಸ್ಟಿಟ್ಯೂಟ್, ಜರ್ಮನಿ(೧೯೯೮), ವಾಟುಮುಲ್ ಡಿಸ್ಟಿಂಗ್ವಿಶ್ಡ್ ಸ್ಕಾಲರ್, ಹವಾಯಿ ವಿಶ್ವವಿದ್ಯಾಲಯ, ಸ್ಪ್ರಿಂಗ್ ಸೆಮಿಸ್ಟರ್(೧೯೯೮), ನ್ಯಾಷನಲ್ ಫೆಲೋ ಇನ್ ಸೈಕಾಲಜಿ, ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ (೧೯೯೨–೯೪), ಮ್ಯಾಕ್ಆರ್ಥರ್ ರಿಸರ್ಚ್ ಫೆಲೋಶಿಪ್ (೧೯೯೩– ೯೪), ಜವಾಹರಲಾಲ್ ನೆಹರು ಫೆಲೋ(೧೯೮೬-೮೮), ಹೋಮಿ ಭಾಭಾ ಫೆಲೋ (೧೯೭೯-೮೦). ಯುವ ಬರಹಗಾರರಿಗೆ ಕರೋಲಿ ಫೌಂಡೇಶನ್ ಪ್ರಶಸ್ತಿ, ೧೯೬೩. ಫ್ರೆಂಚ್ ವಾರಪತ್ರಿಕೆಯಾದ ಲೆ ನೌವೆಲ್ ಅಬ್ಸರ್ವೇಟರ್ ಕಾಕರ್ ಅನ್ನು ವಿಶ್ವದ ೨೫ ಪ್ರಮುಖ ಚಿಂತಕರಲ್ಲಿ ಒಬ್ಬನೆಂದು ವಿವರಿಸಿದರೆ, ಜರ್ಮನ್ ಸಾಪ್ತಾಹಿಕ ಡೈ ಜೀಟ್ ಕಾಕರ್ ಅವರನ್ನು ೨೧ ನೇ ಶತಮಾನದ ಇಪ್ಪತ್ತೊಂದು ಚಿಂತಕರಲ್ಲಿ ಒಬ್ಬನೆಂದು ವಿವರಿಸಲಾಗಿದೆ. ದೆಹಲಿಯ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌, ಆಧುನಿಕ ಏಷ್ಯಾದ ಶ್ರೇಷ್ಠ ಚಿಂತಕರ ಸರಣಿಯಲ್ಲಿನ ಪ್ರಬಂಧಗಳನ್ನು ಪ್ರಕಟಿಸುತ್ತಿದೆ. ಕಾಕರ್‌ನ ೪ ಸಂಪುಟಗಳನ್ನು ಇದು ಒಳಗೊಂಡಿದೆ. == ಕೆಲಸಗಳು == ಮ್ಯಾಡ್ ಮತ್ತು ಡಿವೈನ್: ಸ್ಪಿರಿಟ್ ಮತ್ತುಸೈಕ್ ಇನ್ ದ ಮೊಡೆರ್ನ್ ವರ್ಡ್ ಇನ್ನರ್ ವರ್ಲ್ಡ್: ಎ ಸೈಕೋ-ಅನಾಲಿಟಿಕ್ ಸ್ಟಡಿ ಆಫ್ ಚೈಲ್ಢ್ ಹುಡ್ ಅಂಡ್ ಸೊಸೈಟಿ ಇನ್ ಇಂಡಿಯಾ: ಸೈಕೋಅನಾಲಿಟಿಕ್ ಸ್ಟಡಿ ಆಫ್ ಚೈಲ್ಡ್ ಹುಡ್ ಅಂಡ್ ಸೊಸೈಟಿ ಇನ್ ಇಂಡಿಯಾ, (೧೪ ಅಕ್ಟೋಬರ್ ೧೯೮೨) 0-19-561305-8 (೧೦), 978-0-19-561305-6 (೧೩) ಶಾಮನ್ಸ್, ಮಸ್ಟಿಕ್ ಮತ್ತು ಡಾಕ್ಟರ್ಸ್ ಟೇಲ್ಸ್ ಆಪ್ ಲವ್, ಸೆಕ್ಸ್ ಮತ್ತು ಡೇಂಜರ್ ಇಂಟಿಮೇಟ್ ರಿಲೇಷನ್ಸ್ ದಿ ಕಲರ್ ಆಪ್ ವೈಲೆನ್ಸ್ ದಿ ಇಂಡಿಯ್ನ್ಸ್ ಡೈ ಇಂದರ್. ಪೋರ್ಟ್ರಾಟ್ ಐನರ್ ಗೆಸೆಲ್‌ಶಾಫ್ಟ್ (೨೦೦೬) ಕಾಮಸೂತ್ರ ಫ್ರೆಡೆರಿಕ್ ಟೇಲರ್ ಅಂಡರ್ ಸ್ಟಾಂಡಿಗ್ ಆರ್ಗ್ನೈಷ್ನ್ಲ್ ಬಿಹೇವಿಯರ್ ಕೊನಪ್ಲೀಕ್ಟ್ ಆಂಡ್ ಚಾಯ್ಸ್ ಐಡೆಂಟಿಟಿ ಆಂಡ್ ಅಡಲ್ಟ್ ಹುಡ್ ದಿ ಅನಾಲಿಸ್ಟ್ ಆಂಡ್ ದಿ ಮೈಸ್ಟಿಕ್ ಲಾ ಫೋಲೆ ಎಟ್ ಲೆ ಸೇಂಟ್ ಕಲ್ಚರ್ ಆಂಡ್ ಸೈಕ್ ದಿ ಇಂಡಿಯನ್ ಸೈಕ್ ದಿ ಎಸೆನ್ಸಿಯಲ್ ರೈಟಿಂಗ್ ಒಪ್ ಸುಧೀರ್ ಕಾಕರ್ ಅ ಬುಕ್ ಆಪ್ ಮೆಮೊರಿ, ೨೦೧೧. ಕಾಲ್ಪನಿಕ ದಿ ಆಸ್ಟಿಕ್ ಆಪ್ ಡಿಸೈರ್ ಇಂಡಿಯನ್ ಲವ್ ಸ್ಟೋರಿಸ್ ಎಕ್ಟಾಸಿ ಮೀರಾ ಆಂಡ್ ದಿ ಮಹಾತ್ಮ ದಿ ಕ್ರಿಮಸನ್ ಥ್ರೋನ್ ದಿ ಡೆವಿಲ್ ಟೇಕ್ ಲವ್ == ಮತ್ತಷ್ಟು ಓದುವಿಕೆ == ಟಿಜಿ ವೈದ್ಯನಾಥನ್ ಮತ್ತು ಜೆಫ್ರಿ ಜೆ. ಕೃಪಾಲ್ (ಸಂಪಾದಕರು): ವಿಷ್ಣು ಒನ್ ಫ್ರೆಡ್ಸ್ ಡೆಸ್ಕ್‌ನಲ್ಲಿ : ಎ ರೀಡರ್ ಇನ್ ಸೈಕೋಅನಾಲಿಸಿಸ್ ಅಂಡ್ ಹಿಂದೂ ಧರ್ಮ, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, 0-19-565835-3 , ಪೇಪರ್‌ಬ್ಯಾಕ್ (ಆವೃತ್ತಿ: ೨೦೦೩) == ಇದನ್ನೂ ನೋಡಿ == ಗಿರೀಂದ್ರಶೇಖರ್ ಬೋಸ್ == ಟಿಪ್ಪಣಿಗಳು == , (25 2011), " : — , /, : 318, . 499", == ಬಾಹ್ಯ ಕೊಂಡಿಗಳು == == ಉಲ್ಲೇಖಗಳು ==